ಮದ್ದೂರು: ಸಮೀಪದ ಕೊತ್ತನಹಳ್ಳಿ ಗ್ರಾಮದ ಕೆರೆ ಪುನಶ್ಚೇತನಕ್ಕಾಗಿ ಕಾಯುತ್ತಿದೆ. ಶಿಂಷಾ ಬಲದಂಡೆ ವ್ಯಾಪ್ತಿಯ ಈ ಕೆರೆಗೆ ಶಿಂಷಾನದಿಗೆ ತಗ್ಗಹಳ್ಳಿ ಕಿರುಅಣೆಕಟ್ಟೆಯಿಂದ ನೀರು ಬರುತ್ತದೆ. ಈ ಕೆರೆ, ಕೊತ್ತನಹಳ್ಳಿ, ಚಾಪುರದೊಡ್ಡಿ ಎರಡು ಗ್ರಾಮಗಳಿಗೆ 170ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರು ಉಣಿಸುವ ಸಾಮರ್ಥ್ಯ ಹೊಂದಿದೆ. ಕೆರೆಗೆ ಎರಡು ತೂಬುಗಳಿದ್ದು, ಇವು ಹಾಳಾಗಿವೆ. ಕೆರೆಯ ನಾಲೆಗಳ ಲೈನಿಂಗ್ ಹಾಳಾಗಿದೆ. ಹೀಗಾಗಿ ನೀರು ಅಪವ್ಯಯವಾಗುತ್ತಿದೆ.