‘ಜೈಲು ಗೋಡೆಗಳಿಂದ ಹಾರಿ, ಕೈದಿ ಪರಾರಿಯಾಗಿರುವ ಸಾಧ್ಯತೆ ಕಡಿಮೆ. ಮುಖ್ಯ ದ್ವಾರದಿಂದ ಓಡಿಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳು ಕಾರಾಗೃಹ ಪ್ರಧಾನ ಮೇಲ್ವಿಚಾರಕರಾದ ಜಿ.ಎಂ. ಮಹೇಶ್, ಎ.ಎಸ್. ಕೌಟ್ಕರ್, ಮುಖ್ಯ ವಾರ್ಡನ್ಗಳಾದ ಆರ್.ಎಂ. ಪಾಟೀಲ್, ನಂದೀಶ್ ಅವರನ್ನು ಅಮಾನತು ಮಾಡಿದ್ದಾರೆ’ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಮರಿಗೌಡ ಅವರು ಮಾಹಿತಿ ನೀಡಿದ್ದಾರೆ.