ದೊಡ್ಡಬಳ್ಳಾಪುರದ ರೈತ ನಾಗರಾಜು ಅವರು ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸಿ ಗ್ರಾಹಕರಿಗಾಗಿ ಕಾಯುತ್ತಿದ್ದರು. ಮಧ್ಯಾಹ್ನ ಊಟದ ವಿರಾಮದಲ್ಲಿ ಬಂದ ಹತ್ತಾರು ಗ್ರಾಹಕರಲ್ಲಿ ಬಹುತೇಕ ಮಂದಿ ಹಣ್ಣಿನ ರುಚಿ ನೋಡಿ ಮುಂದುವರಿಯುತ್ತಿದ್ದರು. ಆದರೆ ಹಲಸಿನ ಚಿಪ್ಸ್ ಮತ್ತು ಹಪ್ಪಳಕ್ಕೆ ಸ್ವಲ್ಪ ಮಟ್ಟಿಗೆ ಬೇಡಿಕೆಯಿತ್ತು. ಸಿರಿಧಾನ್ಯ, ಜೇನು ಮತ್ತು ಸಾವಯವ ಉತ್ಪನ್ನ, ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿ, ಉಪ್ಪಿನಕಾಯಿ ಮುಂತಾದ ಉತ್ತರ ಕರ್ನಾಟಕ ಶೈಲಿಯ ಊಟೋಪಹಾರದ ಮಳಿಗೆ ಹೊಟ್ಟೆ ಹಸಿವು ನೀಗಿಕೊಳ್ಳಲು ನೆರವಾಯಿತು.