ಮೌಢ್ಯ ಆಚರಣೆಗಳನ್ನು ನಿಷೇಧಿಸುವ ಬಗ್ಗೆ ಭರವಸೆ ಕೊಟ್ಟಿದ್ದ ಸರ್ಕಾರ, ಈಗ ಈ ಸಂಬಂಧ ಕಾನೂನು ರಚನೆಗೆ ಏಕೆ ಹಿಂದೆ, ಮುಂದೆ ನೋಡುತ್ತಿದೆ?
ಪ್ರಗತಿಪರ ಮಠಾಧೀಶರು ಈಚೆಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮೌಢ್ಯ ನಿಷೇಧ ಕಾನೂನು ರೂಪಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.
ಈ ಸರ್ಕಾರದ ಆಡಳಿತ ಅವಧಿ ಉಳಿದಿರುವುದು ಒಂದು ವರ್ಷ ಮಾತ್ರ. ಆದಕಾರಣ ಇನ್ನಷ್ಟು ವಿಳಂಬ ಮಾಡದೆ, ವಿಧಾನಮಂಡಲದ ಮುಂದಿನ ಅಧಿವೇಶನದಲ್ಲೇ ಸರ್ಕಾರ ಮಸೂದೆ ಮಂಡಿಸಲಿ.
ಹರ್ಷವರ್ಧನ್ ಪಿ., ಹರಿಹರ