‘ಬರದಿಂದಾಗಿ ಕೆರೆಕಟ್ಟೆಗಳು ನೀರಿಲ್ಲದೆ ಒಣಗಿವೆ. ಅವುಗಳ ಹೂಳೆತ್ತುವ ಕಾರ್ಯ ನಡೆಸಿದಲ್ಲಿ ಮುಂಬರುವ ಮಳೆಗಾಲದಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ’ ಎಂದರು.
ತಾಲ್ಲೂಕಿನ ಗೌತಮಪುರ, ಬರೂರು, ಮಲಂದೂರು, ಆನಂದಪುರ, ಬೆಳೆಯೂರು, ಹೊನ್ನೆಸರ, ಕೇಡಲಸರ, ತ್ಯಾಗರ್ತಿ, ಜಂಬಾನೆ, ಬರದವಳ್ಳಿ ಮೊದಲಾದ ಗ್ರಾಮಗಳಲ್ಲಿ ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯ್ತಿ ವಿಭಾಗದಿಂದ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ.