ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನಲ್ಲಿ ರಣಜಿ ಪಂದ್ಯ:ಕೋಚ್‌–ನಾಯಕರ ಒಲವು

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಮುಂಬೈ: ತವರು ಮತ್ತು ಆತಿಥೇಯರ ನೆಲದಲ್ಲಿ ರಣಜಿ ಪಂದ್ಯ ಗಳನ್ನು ಆಯೋಜಿಸುವ ಮಾದರಿಗೆ ನಾಯಕರು ಮತ್ತು ಕೋಚ್‌ಗಳು ಒಲವು ವ್ಯಕ್ತಪಡಿಸಿದ್ದಾರೆ. ತಟಸ್ಥ ಸ್ಥಳದಲ್ಲಿ ಪಂದ್ಯ ಗಳನ್ನು ಆಯೋಜಿಸುವ ಪ್ರಯೋಗವನ್ನು ಕಳೆದ ಋತುವಿನಲ್ಲಿ  ಬಿಸಿಸಿಐ  ಮಾಡಿತ್ತು. 

ಮಂಗಳವಾರ ನಡೆದ ಕೋಚ್‌ ಮತ್ತು ನಾಯಕರ ಸಮಾವೇಶದಲ್ಲಿ ಹಳೆಯ ಪದ್ಧತಿಗೆ ಎಲ್ಲರೂ ಒಲವು ವ್ಯಕ್ತಪಡಿಸಿ ದ್ದಾರೆ ಎಂದು ರಣಜಿ ತಂಡವೊಂದರ ನಾಯಕ ಸಮಾವೇಶದ ನಂತರ ಹೇಳಿದರು.

ಆದರೆ ಬಿಸಿಸಿಐ ಪ್ರಭಾರ ಕಾರ್ಯ ದರ್ಶಿ ಅಮಿತಾಬ್ ಚೌಧರಿ ಅವರ ಪ್ರಕಾರ ಸಭೆಯಲ್ಲಿ ಎಲ್ಲ ಆಯಾಮಗಳ ಬಗ್ಗೆ ಚರ್ಚಿಸಿದ್ದು ಎರಡೂ ವಿಧಾನಗಳಿಗೆ ಒಲವು ವ್ಯಕ್ತವಾಗಿದೆ. ‘ ಸಭೆಯಲ್ಲಿ ಕೇಳಿ ಬಂದ ಎಲ್ಲ ಅಂಶಗಳನ್ನು ಒಳಗೊಂಡ ವರದಿ ತಾಂತ್ರಿಕ ಸಮಿತಿಗೆ ಒಪ್ಪಿಸಲಾಗು ವುದು’     ಎಂದು ಅಮಿತಾಬ್‌ ಚೌಧರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT