ಮುಂಬೈ: ತವರು ಮತ್ತು ಆತಿಥೇಯರ ನೆಲದಲ್ಲಿ ರಣಜಿ ಪಂದ್ಯ ಗಳನ್ನು ಆಯೋಜಿಸುವ ಮಾದರಿಗೆ ನಾಯಕರು ಮತ್ತು ಕೋಚ್ಗಳು ಒಲವು ವ್ಯಕ್ತಪಡಿಸಿದ್ದಾರೆ. ತಟಸ್ಥ ಸ್ಥಳದಲ್ಲಿ ಪಂದ್ಯ ಗಳನ್ನು ಆಯೋಜಿಸುವ ಪ್ರಯೋಗವನ್ನು ಕಳೆದ ಋತುವಿನಲ್ಲಿ ಬಿಸಿಸಿಐ ಮಾಡಿತ್ತು.
ಮಂಗಳವಾರ ನಡೆದ ಕೋಚ್ ಮತ್ತು ನಾಯಕರ ಸಮಾವೇಶದಲ್ಲಿ ಹಳೆಯ ಪದ್ಧತಿಗೆ ಎಲ್ಲರೂ ಒಲವು ವ್ಯಕ್ತಪಡಿಸಿ ದ್ದಾರೆ ಎಂದು ರಣಜಿ ತಂಡವೊಂದರ ನಾಯಕ ಸಮಾವೇಶದ ನಂತರ ಹೇಳಿದರು.
ಆದರೆ ಬಿಸಿಸಿಐ ಪ್ರಭಾರ ಕಾರ್ಯ ದರ್ಶಿ ಅಮಿತಾಬ್ ಚೌಧರಿ ಅವರ ಪ್ರಕಾರ ಸಭೆಯಲ್ಲಿ ಎಲ್ಲ ಆಯಾಮಗಳ ಬಗ್ಗೆ ಚರ್ಚಿಸಿದ್ದು ಎರಡೂ ವಿಧಾನಗಳಿಗೆ ಒಲವು ವ್ಯಕ್ತವಾಗಿದೆ. ‘ ಸಭೆಯಲ್ಲಿ ಕೇಳಿ ಬಂದ ಎಲ್ಲ ಅಂಶಗಳನ್ನು ಒಳಗೊಂಡ ವರದಿ ತಾಂತ್ರಿಕ ಸಮಿತಿಗೆ ಒಪ್ಪಿಸಲಾಗು ವುದು’ ಎಂದು ಅಮಿತಾಬ್ ಚೌಧರಿ ತಿಳಿಸಿದರು.