ಆರೋಪ ಮಾಡುವ ಮೊದಲೇ ಈ ಬಗ್ಗೆ ಆಲೋಚಿಸಬೇಕಿತ್ತು. ಪರಿಶೀಲನೆ ನಂತರ, ಆರೋಪ ಸುಳ್ಳು ಎಂಬ ವರದಿ ದೊರೆತರೆ, ರಾಜ್ಯದ ಜನತೆಯ ಕ್ಷಮೆ ಕೇಳುತ್ತಾರಾ?’ ಎಂದು ಸಚಿವ ಪಾಟೀಲ ಕೇಳಿದರು.
‘ಬಿಜೆಪಿಯವರು ಅಧಿಕಾರ ದಲ್ಲಿ ದ್ದಾಗ ₹500 ಕೋಟಿಗೆ ಐದು ಟಿಎಂಸಿ ಅಡಿ ನೀರನ್ನು ಜಿಂದಾಲ್ಗೆ ಮಾರಿದ್ದಾರೆ ಎಂಬ ದೂರು ಇದೆ. ತುಂಗಭದ್ರಾ ಜಲಾಶಯದಿಂದ ನೀರು ಬಿಡುವ ಬದಲು ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ಬಿಡುಗಡೆ ಮಾಡಿ ನಮ್ಮ ಜನತೆಗೆ ಅನ್ಯಾಯ ಎಸಗಿದ್ದಾರೆ. ಈ ಕುರಿತು ಸದನದ ಒಳಗೂ, ಹೊರಗೂ ಹೋರಾಟ ನಡೆದಿದೆ. ಈ ವಿಷಯದ ಬಗ್ಗೆಯೂ ಉನ್ನತ ಹಂತದ ತನಿಖೆ ನಡೆಯಬೇಕಿದೆ’ ಎಂದು ಸಚಿವರು ಆಗ್ರಹಿಸಿದರು.