ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಮಾಲಿನ್ಯ ಸ್ಥಿತಿ ಹೇಳತೀರದಾಗಿದೆ. ಕೆರೆಗಳ ಸುತ್ತಮುತ್ತಲಿನ ವಾತಾವರಣವೂ ಹದಗೆಟ್ಟಿದೆ. ತ್ವರಿತಗತಿಯಲ್ಲಿ ಪುನರುಜ್ಜೀವನಗೊಳಿಸುವ ಸವಾಲು ಸರ್ಕಾರದ ಅಂಗ ಸಂಸ್ಥೆಗಳ ಮೇಲಿದೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕಾದ ಅಗತ್ಯವಿದೆ.
ಈ ವಿಚಾರವಾಗಿ ವಿಸ್ತೃತ ಹಾಗೂ ವಿವಿಧ ಆಯಾಮಗಳಿಂದ ಚರ್ಚಿಸಲು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯು ಶನಿವಾರ (ಮೇ27) ‘ಡೆಕ್ಕನ್ ಹೆರಾಲ್ಡ್ ಸ್ಪಾಟ್ಲೈಟ್’ ಕಾರ್ಯಕ್ರಮ ಆಯೋಜಿಸಿದೆ.
‘ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಗೆ ಮರುಜೀವ’ ವಿಷಯದ ಕುರಿತು ಸಂವಾದ ನಡೆಯಲಿದೆ. ಪರಿಸರತಜ್ಞರು, ವಿಜ್ಞಾನಿಗಳು ಅಭಿಪ್ರಾಯ ಮಂಡಿಸಲಿದ್ದಾರೆ. ನಾಗರಿಕರು, ಕೆರೆ ಸಂರಕ್ಷಣಾ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಕೆರೆ ಪುನಶ್ಚೇತನ ಕೆಲಸಗಳ ಕುರಿತು ಚರ್ಚೆ, ದೀರ್ಘಾವಧಿ ಕಾರ್ಯಗಳ ವಿಚಾರ ಮಂಥನವಿರುತ್ತದೆ.
ಸ್ಥಳ: ಈಸ್ಟ್ ಕಲ್ಚರಲ್ ಅಸೋಸಿಯೇಷನ್, ಇಂದಿರಾನಗರ 100 ಅಡಿ ರಸ್ತೆ. ಸಂಜೆ 5ರಿಂದ 7.30. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹಾಗೂ ಆನ್ಲೈನ್ ಮೂಲಕ ಹೆಸರು ನೋಂದಾಯಿಸಬಹುದು. ಆನ್ಲೈನ್ ನೋಂದಣಿಗೆ: www.deccanherald.com/spotlight