2003ರಲ್ಲಿ ಸುರಿದ ಮಳೆ ಮತ್ತು ಭೂಕುಸಿತಕ್ಕೆ 250 ಜನ ಮೃತಪಟ್ಟು, 10 ಸಾವಿರ ಮನೆಗಳು ನೆಲಸಮವಾಗಿದ್ದವು. ಕಳೆದ ವರ್ಷ ಭೂಕುಸಿತದಲ್ಲಿ 100 ಜನ ಬಲಿಯಾಗಿದ್ದರು.
ಭಾರತ ನೆರವು
(ನವದೆಹಲಿ): ಪ್ರವಾಹ, ಭೂಕುಸಿತಕ್ಕೆ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವಾಗಲು ಭಾರತ ಮುಂದಾಗಿದೆ. ನೌಕಾಪಡೆಯ ಎರಡು ಹಡಗುಗಳು ಪರಿಹಾರ ಸಾಮಗ್ರಿಗಳನ್ನು ತುಂಬಿಕೊಂಡು ಈಗಾಗಲೇ ಶ್ರೀಲಂಕಾಗೆ ತೆರಳಿವೆ. ಒಂದು ಹಡಗು ಶನಿವಾರ ಬೆಳಗಿನ ಜಾವ ಶ್ರೀಲಂಕಾ ತಲುಪಿದೆ. ಮತ್ತೊಂದು ಹಡಗು ಭಾನುವಾರ ತಲುಪಲಿದೆ.
ಶುಕ್ರವಾರ ರಾತ್ರಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ತಿಳಿಸಿದ್ದಾರೆ.
ಮಳೆ ಮತ್ತು ಭೂಕುಸಿತದಿಂದ ಮೃತಪಟ್ಟವರಿಗೆ ಅವರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ‘ಶ್ರೀಲಂಕಾದ ನಮ್ಮ ಸೋದರ, ಸೋದರಿಯರ ಅಗತ್ಯಗಳಿಗೆ ನಾವು ಸದಾ ನೆರವಾಗುತ್ತೇವೆ’ ಎಂದು ತಿಳಿಸಿದ್ದಾರೆ.
*
ಹಾನಿಯ ನೋಟ
4,93,455 ಮಂದಿ ಸಂತ್ರಸ್ತರು
25 ಜಿಲ್ಲೆಗಳಲ್ಲಿ ಪ್ರವಾಹ ಭೂಕುಸಿತ
150 ಮಂದಿ ಕಣ್ಮರೆಯಾದವರು
185 ತಾತ್ಕಾಲಿಕ ಆಶ್ರಯ ಕೇಂದ್ರಗಳು