ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯದಿಂದ ಅತಿ ಹೆಚ್ಚು ಭವಿಷ್ಯ ನಿಧಿ ಸಂಗ್ರಹವಾಗುತ್ತಿದ್ದು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ ಕೇಂದ್ರ ಸರ್ಕಾರ ಕನ್ನಡವನ್ನು ಕಡೆಗಣಿಸಿದೆ. ಈ ರೀತಿಯಾಗುತ್ತಿರುವುದು ಇದು ಮೊದಲಲ್ಲ, ಭಾರತ ಒಕ್ಕೂಟ ವ್ಯವಸ್ಥೆ ಜಾರಿಯಾದಗಿನಿಂದಲೂ ಕನ್ನಡ ,ಕರ್ನಾಟಕ, ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ತೋರುತ್ತಿದೆ ಎಂದು ಕನ್ನಡ ಗ್ರಾಹಕರ ಕೂಟದ ಅಭಿಯಾನಗಳು & ಭಾರತದಲ್ಲಿ ಕನ್ನಡಕ್ಕೆ ಆಡಳಿತ ಭಾಷೆ ಕೊಡಬೇಕೆನ್ನುವ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಅರುಣ್ ಜಾವಗಲ್ ಅವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪೊಸ್ಟ್ ಮಾಡಿದ್ದಾರೆ.