ಶನಿವಾರ ಬೆಳಿಗ್ಗೆಯಿಂದ ದಟ್ಟ ಮೋಡಗಳಿದು, ತುಂತುರು ಮಳೆ ಬೀಳಲಾರಂಬಿಸಿತು. ಸಂಜೆ ವೇಳೆಗೆ ಬಿರುಸುಗೊಂಡಿತು. ಕೃಷಿ ಚಟುವಟಿಕೆಗೆ ಉತ್ಸಾಹ ತುಂಬಿದೆ. ಬಿತ್ತನೆ ಮಾಡಿದ್ದ ರಾಗಿ, ಆಲೂಗಡ್ಡೆ, ಮುಸುಕಿನಜೋಳ, ದ್ವಿದಳ ಧಾನ್ಯಗಳು ಹಾಗೂ ಬೆಳವಣಿಗೆ ಹಂತದ ತಂಬಾಕು ಕೃಷಿಗೆ ಇದು ನೆರವಾಗಲಿದೆ ಎಂದ ರೈತರು ಹೇಳುತ್ತಾರೆ.