ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ಈ ಸಿನಿಮಾ ಆಗಸ್ಟ್ 15ರ ನಂತರ ಬಿಡುಗಡೆ ಆಗುವ ನಿರೀಕ್ಷೆ ಇದೆ. ಸಿನಿಮಾದ ಕಥಾ ನಾಯಕನ ಹೆಸರು ನಜೀರ್ ಸಾಬ್. ಗೋಹತ್ಯೆ ಈತನ ಕಾಯಕ. ಆದರೆ, ಗೋವಿನಲ್ಲಿ ಮೂವತ್ತಮೂರು ಕೋಟಿ ದೇವತೆಗಳು ವಾಸಿಸುತ್ತಾರೆ ಎಂಬುದನ್ನು ಈತ ಒಂದು ದಿನ ಅರಿಯುತ್ತಾನೆ. ಅರಿತು, ಗೋಹತ್ಯೆಯ ಕಾಯಕವನ್ನು ತ್ಯಜಿಸುತ್ತಾನೆ. ಅದಾದ ನಂತರ ಸಮಸ್ಯೆಗೆ ಸಿಲುಕುತ್ತಾನೆ. ಸಮಸ್ಯೆ ಏನು, ಆತ ಸಮಸ್ಯೆಗೆ ಸಿಲುಕುವುದು ಏತಕ್ಕೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ ಪಲ್ಲಕ್ಕಿ ಅವರು.