‘ಕೆರೆಯಲ್ಲಿ ಉಳುಮೆ ಮಾಡುವುದು ಬೇಡ. ಗ್ರಾಮದ ದನಕರುಗಳಿಗೆ ನೀರಿಲ್ಲದಂತಾಗುತ್ತದೆ. ಅಂತರ್ಜಲ ಬತ್ತಿಹೋಗುತ್ತದೆ ಎಂದು ನಿರ್ಧಾರ ಮಾಡಿದ್ದರು. ಆದರೆ, ಒತ್ತುವರಿ ಮಾಡಿಕೊಂಡವರು ಇದಕ್ಕೆ ಕಿವಿಗೊಡಲಿಲ್ಲ. ಹೀಗಾಗಿ, ಹೋರಾಟ ಅನಿವಾರ್ಯವಾಯಿತು’ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು, ಮೋಹನ್ಕುಮಾರ್, ಮುಖಂಡರಾದ ರಾಜಶೇಖರ್, ಗಂಗಾಧರ್, ಎಚ್.ಎಸ್ ಕುಮಾರ್, ರಾಜೇಗೌಡ, ಕವಿತಾ, ಸಣ್ಣಮ್ಮ ತಿಳಿಸಿದ್ದಾರೆ.