ಮಲ್ಲೇಶ್ವರ ಸಂರಕ್ಷಣಾ ಸಮಿತಿ ಸಮಿತಿಯು ಸ್ಯಾಂಕಿ ಕೆರೆ ಆವರಣದಲ್ಲಿ ಆಯೋಜಿಸಿದ್ದ ಯೋಗ ಮತ್ತು ಪೌಷ್ಟಿಕಾಂಶ ಆಹಾರ ಸೇವನೆ ಜಾಗೃತಿ ಕಾರ್ಯಕ್ರಮದಲ್ಲಿ ಸಿನಿ ತಾರೆ ರಾಗಿಣಿ ದ್ವಿವೇದಿ ಪಾಲ್ಗೊಂಡಿದ್ದರು.
*
ವಿಶ್ವ ಯೋಗ ದಿನಾಚರಣೆ ನಿಮಿತ್ತ ಮಲ್ಲೇಶ್ವರದ ಆಚಾರ್ಯ ಯೋಗ ವಿದ್ಯಾರ್ಥಿನಿಯರು ‘ಆಚಾರ್ಯ ಯೋಗ ಅಕ್ಷರಗಳನ್ನು ಜೋಡಣೆ ಮೂಲಕ ದಶಾವತಾರದ ಕ್ಷೀರಾಬ್ದಿ (ವೈಕುಂಠ) ಪ್ರದರ್ಶಿದರು ಈ ಸಂದರ್ಭದಲ್ಲಿ ಯೋಗ ಗುರುಗಳಾದ ಪದ್ಮಪ್ರಿಯಾ, ಶಶಿಕಲಾ ಹಾಜರಿದ್ದರು.
ಚಿತ್ರ: ಚಂದ್ರಹಾಸ ಕೋಟೆಕಾರ್
*
ಕಠೀರವ ಕ್ರೀಡಾಂಗಣದಲ್ಲಿ ಶ್ವಾಸ ಸಂಸ್ಥೆಯ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಷ್ ವಿಭಾಗ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನದಂದು ಅಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಯೋಗದಲ್ಲಿ ನಿರತರಾಗಿರುವುದು. ಚಿತ್ರ: ಎಸ್. ಕೆ. ದಿನೇಶ್
*
ವಿಶ್ವ ಯೋಗದಿನದ ಅಂಗವಾಗಿ ನಾಗರಬಾವಿಯ ಮಹಾತ್ಮಾಗಾಂಧಿ ಪಾರ್ಕ್ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗಗುರು ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಲ್ಲಿ ಯೋಗಪಟುಗಳು ಸಾಮೂಹಿಕ ಯೋಗಾಸನ ಮಾಡಿದರು.