ಕಲಾಯಿ ಮದೀನಾ ಜುಮ್ಮಾ ಮಸೀದಿಯಲ್ಲಿ ಬುಧವಾರ ಬೆಳಿಗ್ಗೆ ನಮಾಜು ಮುಗಿಸಿದ್ದ ಅಶ್ರಫ್, ಬೆಳಿಗ್ಗೆ 6 ಗಂಟೆಗೆ ಮನೆಯಲ್ಲೇ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ, ಗುರುವಾರ ನಡೆಯಬೇಕಿದ್ದ ಪಕ್ಷದ ನೂತನ ಕಚೇರಿ ಉದ್ಘಾಟನಾ ಸಮಾರಂಭ ಕುರಿತು ಚರ್ಚಿಸಿದ್ದರು. ನಂತರ ಎಳಂದೂರು ಎಂಬಲ್ಲಿ ರಸ್ತೆ ದುರಸ್ತಿ ಕೆಲಸದ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಬೀಡಿ ಕಂಪೆನಿಯ ನೌಕರ ಚಕ್ಕರ್ ಶೀನ ಪೂಜಾರಿ ಎಂಬುವವರ ಜೊತೆ ಬೀಡಿ ಸಾಗಿಸಲು ರಾಮನಗರಕ್ಕೆ ಬಾಡಿಗೆಗೆ ತೆರಳಿದ್ದರು.