‘ರೈತರ ಕಷ್ಟ ಚೆನ್ನಾಗಿ ಗೊತ್ತಿದೆ. ಲಾ ಕಾಲೇಜಿಗೆ ಸೇರುವ ಮೊದಲು ರಜೆಗೆ ಊರಿಗೆ ಹೋದ್ರೆ ಹೊಲ ಊಳೋದೇ ನನ್ ಕೆಲಸ. ಪ್ಯಾಂಟು, ಪಂಚೆ ಹಾಕೊಂಡು ಹೊಲ ಉಳೋಕ್ ಆಗುತ್ತಾ. ಚಡ್ಡಿಲೇ ಉಳ್ತಿದ್ದೆ. ನಾಚಿಕೆ ಏನೂ ಇರಲಿಲ್ಲ, ಅದೊಂದು ಫಸ್ಟ್ ಕ್ಲಾಸ್ ಎ.ಸಿ ರೀತಿ ಇರ್ತಿತ್ತು’ ಎಂದವರೆ ವೇದಿಕೆಯಲ್ಲಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರತ್ತ ನೋಡಿದರು.