ಆದರೆ ಭಯೋತ್ಪಾದಕ ಗುಂಪಿನ ಹೆಸರನ್ನು ಸಚಿವಾಲಯ ಉಲ್ಲೇಖಿಸಿಲ್ಲ. ಯಾವುದೇ ಗುಂಪುಗಳು ಸಹ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಮಹಾ ಮಸೀದಿ ಅಲ್ ಸೌದ್ ರಾಜಮನೆತನವನ್ನು ಪ್ರತಿನಿಧಿಸುವುದರಿಂದ ಈ ಹಿಂದೆಯೂ ಉಗ್ರರು ಸಾಕಷ್ಟು ಬಾರಿ ಈ ಮಸೀದಿ ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ. ರಾಜ ಸಲ್ಮಾನ್್ ಅವರನ್ನು ‘ಎರಡು ಪವಿತ್ರ ಮಸೀದಿಗಳ ಪಾಲಕ’ ಎಂದು ಕರೆಯಲಾಗುತ್ತದೆ.
ರಾಜ ಸಲ್ಮಾನ್ ಈ ವಾರವಷ್ಟೆ ತಮ್ಮ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಇದರಿಂದ ದೇಶದ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಇಂತಹ ಸಂದರ್ಭದಲ್ಲಿಯೇ ಈ ದಾಳಿ ನಡೆದಿದೆ.