ಮೈತಾಡಿಯ ಬಾಳೆಕುಟ್ಟಿರ ಪಿ. ಈರಪ್ಪ (ಬಾಳೋಪಾಟ್ ಹಾಡುಗಾರರು), ಮೂರ್ನಾಡು ಚೌರೀರ ಸೋಮಯ್ಯ ತಿಮ್ಮಯ್ಯ (ಸಂಗೀತ ವಿಭಾಗ), ತೋರ ಗ್ರಾಮದ ಕುಡಿಯರ ದೇವಕ್ಕಿ (ಉರ್ಟಿಕೊಟ್ಟ್ ಹಾಡುಗಾರರು), ಹಾಲುಗುಂದದ ಪುಗ್ಗೇರ ಕೆ.ಪೂವಮ್ಮ (ನೃತ್ಯ), ಪೊನ್ನಂಪೇಟೆಯ ಕುಟ್ಟಂಡ ರಾಜಾರಾಂ ಗಣಪತಿ (ವಾದ್ಯಗೋಷ್ಠಿ), ಕೆದಮಳ್ಳೂರು ಗ್ರಾಮದ ಬೀಕಚಂಡ ಎಂ.ಬಿದ್ದಪ್ಪ (ಕೊಡವ ಜನಪದ ಕಲಾವಿದ), ಕಕ್ಕಬೆ– ಕುಂಜಿಲ ಗ್ರಾಮದ ಉತ್ತುಕುಟ್ಟಡ ಸಿ.ತಿಮ್ಮ ಉಪ್ಪಚ (ಕೊಡವ ಒಡ್ಡೋಲಗ ಕಲಾವಿದ), ಬಿಟ್ಟಂಗಾಲದ ಪೊನ್ನಿರ ಗಗನ್ (ಪೀಚೆಕತ್ತಿ ತಯಾರಕರು, ಉರಗ ಪ್ರೇಮಿ), ಪೊರಾಡು ಗ್ರಾಮದ ಬಲ್ಯಮಿದೇರಿರ ಸಿ.ನಾಣಯ್ಯ (ಕೋಲಾಟ) ಅವರಿಗೆ ತಲಾ ₹ 50 ಸಾವಿರದ ಚೆಕ್ ಹಾಗೂ ವಾರ್ಷಿಕ ಪ್ರಶಸ್ತಿ ನೀಡಲಾಯಿತು.