ಠೇವಣಿ ಹಿಂಪಡೆಯಲು ಬಂದಿದ್ದ ಬಹುತೇಕ ಎಲ್ಲರದೂ ಇದೇ ಅಭಿ ಪ್ರಾಯವಾಗಿತ್ತು. ಅವರಲ್ಲಿ ಹೋಟೆಲ್ ಕಾರ್ಮಿಕರು, ದಿನಗೂಲಿಗಳು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಗ್ರಾಹಕರ ಒತ್ತಾಯಕ್ಕೆ ಮಣಿಯದ ಬ್ಯಾಂಕ್ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕೆಲವು ದಿನಗಳ ನಂತರ ಠೇವಣಿ ಹಿಂತಿರುಗಿಸುವ ಭರವಸೆ ನೀಡಿದರು. ಹಲವು ಠೇವಣಿದಾರರು ವಾಪಸ್ ತೆರಳಿದರೆ, ಕೆಲವರು ಪಟ್ಟುಬಿಡದೇ ಬ್ಯಾಂಕ್ನಲ್ಲೇ ಠಿಕಾಣಿ ಹೂಡಿದ್ದರು.