‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೊಡ್ಡ ವ್ಯಕ್ತಿ. ಅವರು ನಮ್ಮ ಮನೆಗೆ ಬಂದು ಅಮ್ಮನ ಸಾವಿನ ನೋವಿಗೆ ಸಾಂತ್ವನ ಹೇಳಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು.
‘ಶಿವಮೊಗ್ಗ ಪತ್ನಿಯ ತವರು ಮನೆ. ಅಪ್ಪಾಜಿಗೂ ಇಷ್ಟವಾದ ಊರು. ಹಲವು ಬಾರಿ ಹಲವು ಕಾರಣಗಳಿಗಾಗಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಒಂದೇ ದಿನ ಇಂದು ಐದು ಜಿಲ್ಲೆಗಳಲ್ಲಿ ಚಿನ್ನಾಭರಣ ಮಳಿಗೆ ಉದ್ಘಾಟಿಸುತ್ತಿರುವುದು ವಿಶೇಷ. ಜೋಗ ಜಲಪಾತದಂತೆ ಜಿಲ್ಲೆ ಯಲ್ಲೂ ಚಿನ್ನದ ನೀರು ಹರಿಯಲಿ’ ಎಂದು ಆಶಿಸಿದರು.