ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಇಂದು ಭಾರಿ ವಾದ–ವಿವಾದಕ್ಕೆ ಕಾರಣವಾದ ಉದ್ದೇಶಿತ ‘ಅಧಿಕೃತ ಭಾಷೆ ತಿದ್ದುಪಡಿ ಮಸೂದೆ’ಯ ಕುರಿತು ಮಾತನಾಡಿದ ಪ್ರಧಾನಿ, ‘ಅಧಿಕೃತ ಭಾಷೆಯ ವಿಚಾರದಲ್ಲಿ ನಾವು ಎಲ್ಲರಿಗೂ ಒಪ್ಪಿತವಾಗುವಂಥ ಒಂದು ತೀರ್ಮಾನ ಕೈಗೊಳ್ಳಬೇಕಾಗಿದೆ’ ಎಂದರಲ್ಲದೆ, ತಮ್ಮ ಭಾಷೆ ಅಪಾಯದಲ್ಲಿದೆ ಎಂಬ ಭಾವನೆ ಹಿಂದಿಯೇತರ ಭಾಷಿಕರಲ್ಲಿ ಮೂಡದಂತೆ ನೋಡಿಕೊಳ್ಳುವ ಹೊಣೆ ಪಕ್ಷದ ಮುಖಂಡರ ಮೇಲಿದೆ ಎಂದರು.