‘ಮಂಗಳೂರು ಮುಸ್ಲಿಂ’ ಫೇಸ್ಬುಕ್ ಪುಟದಿಂದ ಹಿಂದುಗಳ ಮನಸ್ಸಿಗೆ ನೋವಾಗಿದೆ. ಕೋಮು ದ್ವೇಷ ಹರಡುತ್ತಿರುವ ಈ ಪುಟದ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅಮರನಾಥ ಯಾತ್ರಿಕರಿಗೆ ರಕ್ಷಣೆ ನೀಡಬೇಕು’ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಪ್ರಮುಖರಾದ ಸುರೇಶ್ಚಂದ್ರ ಹೆಗಡೆ, ರವೀಶ ಹೆಗಡೆ, ವೀಣಾ ಭಟ್ಟ, ಪವಿತ್ರಾ ಹೊಸೂರು, ಸುರೇಶ ಶೆಟ್ಟಿ, ಮಹಾಂತೇಶ ಹಾದಿಮನಿ, ವಿಶಾಲ ಮರಾಠೆ ಇದ್ದರು.