‘ದೇಶದಾದ್ಯಂತ ಅನೇಕ ಅನಿಷ್ಟ ಪದ್ಧತಿಗಳು ಅಸ್ತಿತ್ವದಲ್ಲಿವೆ. ಅಲ್ಲಿನ ಜನರನ್ನು ಸಂಘಟಿಸಿ, ಅರಿವು ಮೂಡಿಸಬೇಕು. ಅವರು ಅನುಸರಿಸುತ್ತಿರುವ ಪದ್ಧತಿ ಅಥವಾ ಸಂಪ್ರದಾಯ ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಸರ್ಕಾರ ಅವರಿಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸುಧಾಮೂರ್ತಿ ಹೇಳಿದರು.