‘ಆಗಸ್ಟ್ ಐದರಂದು ನಡೆಯಲಿರುವ ಸ್ಪರ್ಧೆಯಲ್ಲಿ ವಿಜೇಂದರ್ ತಮ್ಮ ವೃತ್ತಿ ಬದುಕಿನ ಅತ್ಯಂತ ಕಠಿಣ ಎದುರಾಳಿಯ ವಿರುದ್ಧ ಕಾದಾಡಲಿದ್ದಾರೆ. ಪಂದ್ಯದ ಮೊದಲ ಎರಡು ಅಥವಾ ಮೂರು ಸುತ್ತುಗಳಲ್ಲೇ ವಿಜೇಂದರ್ ಹೊರಬೀಳಬೇಕು ಎಂಬುದು ನನ್ನ ಆಸೆ. ವಿಜೇಂದರ್ ಅವರ ಈವರೆಗಿನ ಬೌಟ್ಗಳನ್ನು ನನ್ನ ಕಡೆಯವರು ವೀಕ್ಷಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಕೋಚ್ ಮತ್ತು ನಾನು ಹೊಸಬಗೆಯ ತಂತ್ರಗಳನ್ನು ಹೂಡುತ್ತಿದ್ದೇವೆ’ ಎಂದು ಜುಲ್ಫಿಕರ್ ಹೇಳಿದರು.