‘ಔಷಧೀಯ ಗುಣ ಇರುವುದರಿಂದ ಆಷಾಢ ಮಾಸದಲ್ಲಿ ಏಡಿಗೆ ಬೇಡಿಕೆ ಹೆಚ್ಚು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭತ್ತದ ಗದ್ದೆಗಳು ಕಣ್ಮರೆಯಾಗಿದ್ದು, ಹೋಂಸ್ಟೇಗಳಾಗಿ ಬದಲಾಗಿವೆ. ಇದೇ ಕಾರಣಕ್ಕೆ ಕುಶಾಲನಗರದ ಹಾರಂಗಿ ಜಲಾಶಯ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ಬೀಮನಹಳ್ಳಿಯಿಂದ ಏಡಿ ತಂದು ಮಾರಾಟ ಮಾಡಲಾಗುತ್ತಿದೆ. ಕೆ.ಜಿಗೆ ₨ 200 ಹಾಗೂ ಕಟ್ಟಿಗೆ (12 ಏಡಿ) ₨250 ದರವಿದೆ; ಕಣಿಲೆಗೆ ಕಟ್ಟಿಗೆ ₨50 ಬೆಲೆಯಿದೆ’ ಎಂದು ಮಾರಾಟಗಾರ ಇಂದಿರಾ ನಗರದ ನಿವಾಸಿ ಎಚ್.ಎಲ್. ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.