ಯಲ್ಲಾಪುರ ತಾಲ್ಲೂಕಿನ ಬಿಲ್ಲಿಗದ್ದೆಯಲ್ಲಿ ಹೈನುಗಾರಿಕೆ ಮಾಡುತ್ತಿರುವ ವಿನಾಯಕ ನಾಯ್ಕ, ‘ಒಂದೇ ವರ್ಷದಲ್ಲಿ ವಾಹನಗಳಿಗೆ 12 ದನಗಳು ಬಲಿಯಾಗಿವೆ’ ಎಂದು ಹೇಳುತ್ತಾರೆ. ಕೊಟ್ಟಿಗೆಯಲ್ಲಿಯೇ ಎಲ್ಲಾ ದನಗಳನ್ನು ಕಟ್ಟಿ ಸಾಕುವುದು ಕೂಡ ಅಷ್ಟೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಮಲೆನಾಡಿನ ಹೈನೋದ್ಯಮಿಗಳ ಪಾಲಿಗೆ ಈ ನೊಣಗಳ ಸಮಸ್ಯೆ ‘ಇರ್ಬಾಯ ಕಡ್ಗವಿದು, ಹಾಹ್ದತ್ತ ಹದನವಿದೆ’ ಎನ್ನುವಂತೆ ಕಾಡುತ್ತಿದೆ.