ಕನ್ನಡದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡದಲ್ಲಿ ಒದಗಿಸಲು ಅನುವು ಮಾಡಿಕೊಡಲು ಈಗ ಉಳಿದಿರುವ ಏಕೈಕ ಮಾರ್ಗವಾದ ಸೂಕ್ತ ಸಾಂವಿಧಾನಿಕ ತಿದ್ದುಪಡಿಗೆ ಯಾವ ಪ್ರಯತ್ನವನ್ನೂ ಮಾಡದಿರುವ ರಾಜ್ಯ ಸರ್ಕಾರ ಈಗ ಚುನಾವಣೆ ಹತ್ತಿರ ಬರುತ್ತಿರುವಂತೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಹೊರಟಿರುವುದು ಬರೀ ಡಂಬಾಚಾರ, ರಾಜಕೀಯ ಯುಕ್ತಿ, ಸಾರ್ವಜನಿಕ ಹಣದ ದುರ್ಬಳಕೆ ಮತ್ತು
ಹುಸಿ ಪ್ರತಿಷ್ಠೆಯ ಹಾಸ್ಯಾಸ್ಪದ ಪ್ರದರ್ಶನ ಎನಿಸಿಕೊಳ್ಳುತ್ತದೆ.