ಸುಮಾರು ₹ 14 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತದ ಕಾಮಗಾರಿಯ ಭೂಸ್ವಾದೀನ ವೆಚ್ಚ, ಕಾರ್ಯಾಚರಣೆಯ ನಷ್ಟದ ಹೊರೆ ರಾಜ್ಯ ಸರ್ಕಾರದ ಮೇಲೆಯೇ ಬೀಳುತ್ತದೆ. ಕೇಂದ್ರ ಸರ್ಕಾರ ಬರೀ 7,000 ಕೋಟಿಯಷ್ಟು ಅನುದಾನ ನೀಡಿದೆ. ಉಳಿದ ಹಣವನ್ನು ಕರ್ನಾಟಕವೇ ಹೊಂದಿಸಿಕೊಂಡು ಈ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿರುವ ಸತ್ಯ ಎಲ್ಲರಿಗೂ ತಿಳಿಯಬೇಕಿದೆ. ಕೇಂದ್ರದ ಧೋರಣೆ ಹೇಗಿದೆ ಎಂದರೆ ‘ಹಸುವನ್ನು ಕನ್ನಡಿಗರು ಸಾಕಲಿ... ಅದರ ಹಾಲು ಮಾತ್ರ ಕೇಂದ್ರದ ಪಾಲಾಗಲಿ’ ಎಂಬಂತೆ ಭಾಸವಾಗುತ್ತಿದೆ.