ಸಿಂಧನೂರು: ನಗರದ ಉಪ್ಪಾರವಾಡಿ, ಮಂಡಾಳಭಟ್ಟಿ ಏರಿಯಾ, ಜನತಾಕಾಲೊನಿ ಮುಂತಾದ ಬಡಾವಣೆಗಳಲ್ಲಿ ದುರ್ನಾತ ಬೀರುವ ಅಶುದ್ಧ ನೀರು ಪೂರೈಕೆಯಾಗುತ್ತಿದ್ದು, ಜನರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಬಹುತೇಕ ಮಂದಿ ಡೆಂಗಿ ಮತ್ತು ಇನ್ನಿತರ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.