‘ಇದು ಕೇವಲ ಮಧ್ವ ಸಮಾಜಕ್ಕೆ ಮಾತ್ರ ಹೆಮ್ಮೆಯ ವಿಷಯವಲ್ಲ, ಇಡೀ ಪಂಡಿತ ಪರಂಪರೆಗೆ ಸಂದ ಗೌರವ. ಅವರು ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದ ಸಂದರ್ಭದಲ್ಲಿ ದಕ್ಷವಾಗಿ ಕೆಲಸ ಮಾಡಿದ ಅವರನ್ನು ಈಗಲೂ ನೆನಪಿಸಿಕೊಳ್ಳಲಾಗುತ್ತದೆ. ಮೊದಲು ಅವರು ನನಗೆ ಶಿಷ್ಯರಾಗಿದ್ದರು, ಆದರೆ ಈಗ ಅವರೂ ಪೀಠಾಧಿಪತಿ ಆಗಿರುವುದರಿಂದ ಇಬ್ಬರೂ ಸಹೋದರರಂತೆ. ಅವರು ನನ್ನ ಐದನೇ ಪರ್ಯಾಯದ ಅವಧಿಯಲ್ಲಿಯೇ ಮಠಾಧೀಶರಾದದ್ದು ಸಂತಸದ ಸಂಗತಿ’ ಎಂದರು.