ಇದನ್ನರಿತ ದೇವಾಲಯದ ಅರ್ಚಕರಾದ ಬಸಯ್ಯ ಪೂಜಾರಿ ಮತ್ತು ಶ್ರೀಶೈಲ ಪೂಜಾರಿ ಕಳೆದ ಹಲವು ತಿಂಗಳಿಂದ ಅದರ ಜೀರ್ಣೋದ್ಧಾರದ ಭಾಗವಾಗಿ ಭಕ್ತರ ಟ್ರಸ್ಟ್ ರಚಿಸಿದ್ದಾರೆ. ಆ ಮೂಲಕ ದೇವಾಲಯ ತಲುಪಲು ಸಾಧ್ಯವಾಗುವಂತೆ, ಈಗಿರುವ ವೀರಶೈವ ಸಮಾಜದ ರುದ್ರಭೂಮಿಯ ಹಿಂಭಾಗದಿಂದ ನದಿಯಾಚೆಯ ಸಂಗಮೇಶ್ವರ ದೇವಾಲಯ ತಲುಪಲು ₹ 20 ಲಕ್ಷ ವೆಚ್ಚದಲ್ಲಿ 61 ಮೀಟರ್ ಉದ್ದದ ತೂಗು ಸೇತುವೆ ನಿರ್ಮಿಸಲು ನೀಲನಕ್ಷೆ ತಯಾರಿಸಿದ್ದಾರೆ.