ಈ ನೀರು ತಾಲ್ಲೂಕಿನ ಕಮಲಾಪುರ ಸಮೀಪದ ಪವರ್ ಕಾಲುವೆಗೆ ಹೋಗಿ, ನಂತರ ಕೆಳಮಟ್ಟದ ಕಾಲುವೆ ಮೂಲಕ ಕಂಪ್ಲಿ, ಬಳ್ಳಾರಿ ಕಡೆಗೆ ಹರಿದು ಹೋಗುತ್ತದೆ.
‘ಎಡದಂಡೆ ಕೆಳಮಟ್ಟದ ಕಾಲುವೆಗೆ ಸೋಮವಾರ ರಾತ್ರಿಯಿಂದ 200 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಹಂತ ಹಂತವಾಗಿ ಸಾವಿರ ಕ್ಯುಸೆಕ್ ನೀರು ಹರಿಸಲಾಗುವುದು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯ ದರ್ಶಿ ಡಿ. ರಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.