ಸಮುದಾಯ ಅಧ್ಯಕ್ಷ ಜಗದೀಶ್ ನಾಯಕ್ ಮಾತನಾಡಿ, ‘ದೇಶದಲ್ಲಿ ಇಂದು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಮಾಡಬೇಕು. ಮನುಷ್ಯರ ನಡುವೆ ವಿಶ್ವಾಸ ವೃದ್ಧಿಯಾಗಬೇಕು. ಎಲ್ಲ ರೀತಿಯ ಕಂದರ ಕಡಿಮೆಯಾಗಬೇಕು’ ಎಂದರು. ರಾಜ್ಯ ಸಮುದಾಯ ಘಟಕದ ಅಧ್ಯಕ್ಷ ಅಚ್ಯುತ, ಅಲಿಕ್, ಶಶಿಧರ್, ಸುರೇಶ್ಬಾಬು, ರವೀಂದ್ರಚಾರಿ, ಪ್ರೊ.ವಿನೋದ್, ಪ್ರೊ. ರೇವತಿ, ಡಾ.ಕೃಷ್ಣಕುಮಾರ್ ಹಾಜರಿದ್ದರು. ಫ್ಲೋರ ನಿರೂಪಿಸಿದರು.