ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಮಂಗಳವಾರ ಪಾಕಿಸ್ತಾನದ ದಾಳಿಯಲ್ಲಿ ಗಾಯಗೊಂಡಿದ್ದ ಸೇನೆಯ ಕಿರಿಯ ಅಧಿಕಾರಿ ಶಶಿ ಕುಮಾರ್ ಬುಧವಾರ ಮೃತಪಟ್ಟರು.
ಈ ಘಟನೆಯಲ್ಲಿ ಸಿಪಾಯಿ ಜಸ್ಪ್ರೀತ್ ಸಿಂಗ್ ಎಂಬುವವರು ಮಂಗಳವಾರವೇ ಮೃತಪಟ್ಟಿದ್ದರು.
ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ಬಾಲಕೋಟೆ ವಲಯದಲ್ಲಿ ಗಡಿನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಸೈನಿಕರು ಸತತ ಮೂರನೇ ದಿನ ಬುಧವಾರವೂ ಗುಂಡಿನ ದಾಳಿ ಮುಂದುವರಿಸಿದ್ದಾರೆ. ಅವರಿಗೆ ನಮ್ಮ ಸೈನಿಕರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದು ಗುಂಡಿನ ಕಾಳಗ ಆಗಾಗ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.