ಇಂಥ ‘ಭಾಗ್ಯ’ಗಳ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಕಾಳು, ಎಣ್ಣೆ, ಉಪ್ಪು; ವಿದ್ಯಾರ್ಥಿಗಳಿಗೆ ವಿತರಿಸಿದ ಶೂ, ಮೊಟ್ಟೆ, ಸೈಕಲ್; ಆಸ್ಪತ್ರೆಗಳಲ್ಲಿ ವಿತರಿಸುವ ಔಷಧಿ, ಆಹಾರ ಸಾಮಗ್ರಿ... ಹೀಗೆ ಎಲ್ಲದರಲ್ಲೂ ಗುಣಮಟ್ಟ ಕುಸಿತ ಆಗುತ್ತಿರುವುದು ಸರಿಯಲ್ಲ. ಜನಪರ ಯೋಜನೆಗಳನ್ನು ಜಾರಿಗೆ ತರುವುದು ಒಳ್ಳೆಯದಾದರೂ ಅವುಗಳ ಅನುಷ್ಠಾನ ಹಳ್ಳಹಿಡಿಯುತ್ತಿರುವುದು ದುರಂತವಲ್ಲವೇ?