‘ನವೋದ್ಯಮ’ ಮತ್ತು ‘ಕೌಶಲ ಭಾರತ’ ಎಂಬ ಘೋಷಣೆಗಳ ಮರೆಯಲ್ಲಿ ಇಂಥ ಸಂಸ್ಥೆಗಳು ಜನ್ಮತಾಳಿ ಯುವಜನರನ್ನು ಸೆಳೆದು ಶೋಷಿಸುತ್ತವೆ. ಸರ್ಕಾರ ಮತ್ತು ಚಲನಚಿತ್ರ ಮಂಡಳಿ ಇಂಥವುಗಳನ್ನು ನಿಯಂತ್ರಿಸಬೇಕು. ವೇಗವಾಗಿ ಹಣ ಗಳಿಸುವ ಚಾಳಿ ಇತ್ತೀಚಿನ ದಿನಗಳಲ್ಲಿ ವಿಪರೀತವಾಗುತ್ತಿದೆ. ಹಾಗಾಗಿ ಆಕಾಂಕ್ಷಿ ವಿದ್ಯಾರ್ಥಿಗಳನ್ನು ಶೋಷಣೆಗೆ (ಕೆಲವೊಮ್ಮೆ ಅನೈತಿಕ ಚಟುವಟಿಕೆಗಳಿಗೆ) ಒಳಪಡಿಸುವುದುಂಟು. ಇಂಥ ಸಂಸ್ಥೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.
-ಬಿ. ರಮೇಶ್, ಉತ್ತರಹಳ್ಳಿ