ಕಾಂಗ್ರೆಸ್ನ ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ, ವಿಶ್ವನಾಥ್, ಕೆ. ಜಯಪ್ರಕಾಶ್ ಹೆಗ್ಡೆ ಪಕ್ಷ ತೊರೆದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕೃಷ್ಣ ಅವರು ತಪ್ಪು ನಿರ್ಧಾರದಿಂದ ಪಕ್ಷ ಬಿಟ್ಟಿದ್ದು, ವಿಶ್ವನಾಥ್ಗೆ ಪಕ್ಷ ಶಾಸಕ, ಸಚಿವ,ಸಂಸದ,ಸೇರಿದಂತೆ ವಿವಿಧ ಅವಕಾಶ ಕಲ್ಪಿಸಿದೆ. ಅಲ್ಲದೇ ಅವರ ಮಗನನ್ನು ಜಿಲ್ಲಾ ಪಂಚಾಯಿತಿ ಸದಸ್ಯನ ನ್ನಾಗಿ ಮಾಡಿದೆ. ಕೆ. ಜಯಪ್ರಕಾಶ್ ಹೆಗ್ಡೆ ನಮ್ಮ ಆತ್ಮೀಯರಾಗಿದ್ದು ಆತುರದಿಂದ ಪಕ್ಷ ತೊರೆದಿದ್ದಾರೆ.