‘ಮಳೆಯೊಂದಿಗೆ ಬೀಸಿದ ಗಾಳಿ ಯಿಂದಾಗಿ ಮಾಕೋನಹಳ್ಳಿ, ದಾರದ ಹಳ್ಳಿ, ಮತ್ತಿಕಟ್ಟೆ ಭಾಗಗಳಲ್ಲಿ ಸುಮಾ ರು 70 ವಿದ್ಯುತ್ ಕಂಬಗಳು ಧರೆಗುರುಳಿವೆ. ಕಳಸ ಹೋಬಳಿಯಲ್ಲೂ ಸುಮಾರು 20 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಕಿತ್ಲೆಗಂಡಿ, ಬಣಕಲ್ ನಿಡ್ನಳ್ಳಿ ಹಾಗೂ ಜನ್ನಾಪುರದಲ್ಲಿ ವಿದ್ಯುತ್ ಪರಿವರ್ತಕದ ಮೇಲೆ ಮರ ಬಿದ್ದು 3 ವಿದ್ಯುತ್ ಪರಿವರ್ತಕಗಳಿಗೆ ಹಾನಿ ಸಂಭವಿಸಿದೆ’ ಎಂದು ಮೆಸ್ಕಾಂ ಎಂಜಿನಿಯರ್ ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.