‘ಅವನೊಂದು ಹೊಡೆದರೆ, ನಾನೊಂದು ಹೊಡೆಯುತ್ತೇನೆ ಎಂಬ ಧೋರಣೆ ಸರಿಯಲ್ಲ. ಇದರಿಂದ ಹಿಂಸೆ ಹೆಚ್ಚುತ್ತದೆ. ಉಗ್ರಗಾಮಿಗಳು ಅಮೆರಿಕ ಅವಳಿ ಗೋಪುರಗಳ ಮೇಲೆ ದಾಳಿ ಮಾಡಿದ ನಂತರ, ಹಲವು ರಾಷ್ಟ್ರಗಳಲ್ಲಿ ಯುದ್ಧ ಸಾರಲಾಯಿತು. ಅದು ಅನವಶ್ಯಕವಾಗಿತ್ತು. ಉಗ್ರರ ದಾಳಿಗೆ ಕಾರಣಗಳು ಏನು ಎಂಬುದನ್ನು ತಿಳಿದುಕೊಳ್ಳುವ ಮೂಲಕ ಅದರ ಪರಿಹಾರಕ್ಕೆ ಪ್ರಯತ್ನಿಸುವುದು ಸರಿಯಾದ ಮಾರ್ಗ’ ಎಂದು ಅವರು ಅಭಿಪ್ರಾಯಪಟ್ಟರು.