ಚುನಾವಣೆ ಹಾಗೂ ಸ್ಪರ್ಧೆಯನ್ನೇ ಗುರಿಯಾಗಿ ಇರಿಸಿಕೊಂಡು ಜೆಡಿಎಸ್ ಅಥವಾ ಇತರ ಪಕ್ಷಗಳಿಂದ ಕಾಂಗ್ರೆಸ್ಗೆ ವಲಸೆ ಬಂದಿರುವ ಹಾಗೂ ಬರಲಿರುವವರಿಗೆ ಮಣೆ ಹಾಕಬಾರದು. ಬದಲಿಗೆ, ಪಕ್ಷ ಸಂಘಟನೆಗಾಗಿ ಅನೇಕ ವರ್ಷಗಳಿಂದ ಶ್ರಮಿಸಿರುವ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಜನತಾ ಪರಿವಾರದಿಂದ ಬಂದವರಿಗೆ ಆದ್ಯತೆ ನೀಡದಂತೆ ತಡೆಯಬೇಕು ಎಂಬುದೂ ಅವರ ಬೇಡಿಕೆಯಾಗಿದೆ.