ಮಂಗಳೂರು: ಹಾಟ್ ಮೊಂಡೆ ಸಂಸ್ಥೆ ನಡೆಸುವ ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್ಗೆ ಮಂಗಳೂರಿನ ಸೌಜನ್ಯ ಹೆಗ್ಡೆ ಆಯ್ಕೆಯಾಗಿದ್ದಾರೆ.
ಇದೇ 27ರಿಂದ ಆಗಸ್ಟ್ 4ರವರೆಗೆ ವಿಯೆಟ್ನಾಂನಲ್ಲಿ ನಡೆಯಲಿರುವ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಅವರು, ಮಿಸೆಸ್ ಇಂಡಿಯಾ ವರ್ಲ್ಡ್ವೈಡ್ ಕಿರೀಟದೊಂದಿಗೇ ವಾಪಸಾಗುವುದು ತಮ್ಮ ಕನಸು ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಗತ್ತಿನ ವಿವಿಧೆಡೆ ನೆಲೆಸಿದ ಭಾರತೀಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವರು. ಅಂತಿಮ ಸುತ್ತು ಆ. 5ರಂದು ನವದೆಹಲಿಯಲ್ಲಿ ನಡೆಯಲಿದೆ ಎಂದರು. ಬೆಂಗಳೂರು ವಲಯದಲ್ಲಿ 1,200 ಮಂದಿ ಆಕಾಂಕ್ಷಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು.
ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಏಳು ಮಂದಿ ಆಯ್ಕೆಯಾಗಿದ್ದಾರೆ. ಮಂಗಳೂರಿನಿಂದ ಆಯ್ಕೆ ಆಗಿರುವ ಏಕೈಕ ಸ್ಪರ್ಧಿ ಸೌಜನ್ಯ. ಇವರ ಪತಿ ಸುಧೀರ್ ಹೆಗ್ಡೆ ಎಂಜಿನಿಯರ್ ಆಗಿದ್ದಾರೆ.