<p><strong>ಬೆಂಗಳೂರು/ಧಾರವಾಡ:</strong> ‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ವಿಷಯದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಧ್ಯ ಪ್ರವೇಶ ಬೇಕಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಪ್ರತಿಪಾದಿಸಿದ್ದಾರೆ.</p>.<p>ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಪ್ರತ್ಯೇಕವಾಗಿ ಮಾತನಾಡಿದ ಇಬ್ಬರು ಸಚಿವರು, ‘ಇದು ನಮ್ಮ ಸಮುದಾಯಕ್ಕೆ ಸೇರಿದ ಸಂಗತಿ. ಈ ವಿಷಯದಲ್ಲಿ ಬೇರೆಯವರು ಗೊಂದಲ ಸೃಷ್ಟಿಸುವುದು ಬೇಡ’ ಎಂದು ಹೇಳಿದ್ದಾರೆ.</p>.<p>‘ಪೇಜಾವರ ಶ್ರೀಗಳು ಆರ್ಆರ್ಎಸ್ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ಪ್ರತ್ಯೇಕ ಧರ್ಮದ ವಿಷಯದಲ್ಲಿ ಕೈ ಹಾಕುವ ಕೆಲಸವನ್ನು ಅವರು ಮಾಡಬಾರದು. ನಮ್ಮ ಸಮುದಾಯದವರು ಅದಕ್ಕೆ ಅವಕಾಶವನ್ನೂ ಕೊಡಬಾರದು’ ಎಂದು ಎಂ.ಬಿ. ಪಾಟೀಲ ಒತ್ತಾಯಿಸಿದರು.</p>.<p>‘ವೀರಶೈವ ಮತ್ತು ಲಿಂಗಾಯತರು ಸೇರಿ ಪ್ರತ್ಯೇಕ ಧರ್ಮ ರಚಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ನಮ್ಮ ಸಮುದಾಯದ ಸ್ವಾಮೀಜಿಗಳು, ಹಾಗೂ ಮುಖಂಡರು ನಿರ್ಧರಿಸಲಿದ್ದಾರೆ. ಲಿಂಗಾಯತ ಧರ್ಮವು ಬೌದ್ಧ, ಸಿಖ್ ಧರ್ಮಗಳಂತೆ ಜಾಗತಿಕ ಧರ್ಮ ಆಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ನಮ್ಮ ಸಮುದಾಯದ ಕೆಲವು ರಾಜಕೀಯ ಮುಖಂಡರೂ ಆರ್ಎಸ್ಎಸ್ ಹಿಡಿತದಲ್ಲಿದ್ದಾರೆ. ಹೀಗಾಗಿ ಸ್ವಾರ್ಥದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಅವರು ದೂರಿದರು. ‘ಯಡಿಯೂರಪ್ಪ ಅವರು ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಬೇಕಾಗಿತ್ತು. ಆರ್ಎಸ್ಎಸ್ ಹಾಗೂ ಚುನಾವಣೆ ಭಯದಿಂದ ಅವರು ವಿರೋಧ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಅವರು ತಪ್ಪು ಮಾಡುತ್ತಿದ್ದಾರೆ’ ಎಂದೂ ಟೀಕಿಸಿದರು.</p>.<p>‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಆಗಬೇಕು ಎಂಬುದು ಈಗಿನ ಬೇಡಿಕೆಯಲ್ಲ. ಈ ಹಿಂದೆಯೂ ಚರ್ಚೆಯಾಗಿತ್ತು. ಧರ್ಮ ಸ್ಥಾಪನೆ ವಿಷಯ ಈಗಾಗಲೇ ವಿಳಂಬವಾಗಿದೆ. ಸಿದ್ದಗಂಗಾ ಮಠದ ಶ್ರೀಗಳು ಇದನ್ನು ಒಪ್ಪುತ್ತಾರೆ’ ಎಂದು ಸಚಿವ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ‘ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಅವರನ್ನು ಅನಗತ್ಯವಾಗಿ ಎಳೆದು ತರಬಾರದು’ ಎಂದರು.</p>.<p><strong>ಕಾನೂನು ಹೋರಾಟ:</strong> ‘ಪ್ರತ್ಯೇಕ ಧರ್ಮ ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಬೇಕು. ಅಗತ್ಯವಾದರೆ ಈ ವಿಷಯದಲ್ಲಿ ಕಾನೂನು ಹೋರಾಟ ಮಾಡಲೂ ಸಿದ್ಧ’ ಎಂದು ಪಾಟೀಲ ಸ್ಪಷ್ಟಪಡಿಸಿದರು. ಧಾರವಾಡದಲ್ಲಿ ಮಾತನಾಡಿದ ಸಚಿವ ವಿನಯ ಕುಲಕರ್ಣಿ, ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆದರೆ ಒಳ ಪಂಗಡಗಳಲ್ಲಿನ ಸಾಕಷ್ಟು ಬಡ ಕುಟುಂಬಗಳಿಗೆ ಸವಲತ್ತು ಸಿಗುತ್ತವೆ’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು/ಧಾರವಾಡ:</strong> ‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ವಿಷಯದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಧ್ಯ ಪ್ರವೇಶ ಬೇಕಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಪ್ರತಿಪಾದಿಸಿದ್ದಾರೆ.</p>.<p>ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಪ್ರತ್ಯೇಕವಾಗಿ ಮಾತನಾಡಿದ ಇಬ್ಬರು ಸಚಿವರು, ‘ಇದು ನಮ್ಮ ಸಮುದಾಯಕ್ಕೆ ಸೇರಿದ ಸಂಗತಿ. ಈ ವಿಷಯದಲ್ಲಿ ಬೇರೆಯವರು ಗೊಂದಲ ಸೃಷ್ಟಿಸುವುದು ಬೇಡ’ ಎಂದು ಹೇಳಿದ್ದಾರೆ.</p>.<p>‘ಪೇಜಾವರ ಶ್ರೀಗಳು ಆರ್ಆರ್ಎಸ್ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ಪ್ರತ್ಯೇಕ ಧರ್ಮದ ವಿಷಯದಲ್ಲಿ ಕೈ ಹಾಕುವ ಕೆಲಸವನ್ನು ಅವರು ಮಾಡಬಾರದು. ನಮ್ಮ ಸಮುದಾಯದವರು ಅದಕ್ಕೆ ಅವಕಾಶವನ್ನೂ ಕೊಡಬಾರದು’ ಎಂದು ಎಂ.ಬಿ. ಪಾಟೀಲ ಒತ್ತಾಯಿಸಿದರು.</p>.<p>‘ವೀರಶೈವ ಮತ್ತು ಲಿಂಗಾಯತರು ಸೇರಿ ಪ್ರತ್ಯೇಕ ಧರ್ಮ ರಚಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ನಮ್ಮ ಸಮುದಾಯದ ಸ್ವಾಮೀಜಿಗಳು, ಹಾಗೂ ಮುಖಂಡರು ನಿರ್ಧರಿಸಲಿದ್ದಾರೆ. ಲಿಂಗಾಯತ ಧರ್ಮವು ಬೌದ್ಧ, ಸಿಖ್ ಧರ್ಮಗಳಂತೆ ಜಾಗತಿಕ ಧರ್ಮ ಆಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.</p>.<p>‘ನಮ್ಮ ಸಮುದಾಯದ ಕೆಲವು ರಾಜಕೀಯ ಮುಖಂಡರೂ ಆರ್ಎಸ್ಎಸ್ ಹಿಡಿತದಲ್ಲಿದ್ದಾರೆ. ಹೀಗಾಗಿ ಸ್ವಾರ್ಥದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಅವರು ದೂರಿದರು. ‘ಯಡಿಯೂರಪ್ಪ ಅವರು ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಬೇಕಾಗಿತ್ತು. ಆರ್ಎಸ್ಎಸ್ ಹಾಗೂ ಚುನಾವಣೆ ಭಯದಿಂದ ಅವರು ವಿರೋಧ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಅವರು ತಪ್ಪು ಮಾಡುತ್ತಿದ್ದಾರೆ’ ಎಂದೂ ಟೀಕಿಸಿದರು.</p>.<p>‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಆಗಬೇಕು ಎಂಬುದು ಈಗಿನ ಬೇಡಿಕೆಯಲ್ಲ. ಈ ಹಿಂದೆಯೂ ಚರ್ಚೆಯಾಗಿತ್ತು. ಧರ್ಮ ಸ್ಥಾಪನೆ ವಿಷಯ ಈಗಾಗಲೇ ವಿಳಂಬವಾಗಿದೆ. ಸಿದ್ದಗಂಗಾ ಮಠದ ಶ್ರೀಗಳು ಇದನ್ನು ಒಪ್ಪುತ್ತಾರೆ’ ಎಂದು ಸಚಿವ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ‘ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಅವರನ್ನು ಅನಗತ್ಯವಾಗಿ ಎಳೆದು ತರಬಾರದು’ ಎಂದರು.</p>.<p><strong>ಕಾನೂನು ಹೋರಾಟ:</strong> ‘ಪ್ರತ್ಯೇಕ ಧರ್ಮ ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಬೇಕು. ಅಗತ್ಯವಾದರೆ ಈ ವಿಷಯದಲ್ಲಿ ಕಾನೂನು ಹೋರಾಟ ಮಾಡಲೂ ಸಿದ್ಧ’ ಎಂದು ಪಾಟೀಲ ಸ್ಪಷ್ಟಪಡಿಸಿದರು. ಧಾರವಾಡದಲ್ಲಿ ಮಾತನಾಡಿದ ಸಚಿವ ವಿನಯ ಕುಲಕರ್ಣಿ, ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆದರೆ ಒಳ ಪಂಗಡಗಳಲ್ಲಿನ ಸಾಕಷ್ಟು ಬಡ ಕುಟುಂಬಗಳಿಗೆ ಸವಲತ್ತು ಸಿಗುತ್ತವೆ’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>