ನಿಮ್ಮ ಆರ್ಥಿಕ ಪರಿಸ್ಥಿತಿ, ಆರೋಗ್ಯ ಸರಿಯಾಗಬೇಕಾದರೆ ನವಗ್ರಹ ಪೂಜೆ, ಶಾಂತಿ, ಹೋಮ ಮಾಡಿಸಿ, ಅದೃಷ್ಟದ ತಾಯತ, ಬಳೆ, ಉಂಗುರ ಧರಿಸಿ ಎನ್ನುವ ಸಲಹೆ ಕೊಡುತ್ತಾರೆ. ಟಿ.ವಿ ಗಳಲ್ಲಿ ಬಂದು ಕೂರುವ ಜ್ಯೋತಿಷಿಗಳು, ಪೂಜಾರಿಗಳ ಮಾತು ನಂಬಲೇಬೇಡಿ. ಅವರು ಟಿ.ವಿ ಮಾಧ್ಯಮಗಳೊಂದಿಗೆ ಹಣಕಾಸು ಒಪ್ಪಂದ ಮಾಡಿಕೊಂಡು, ಲಾಭದ ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ಜ್ಯೋತಿಷ ಗೊತ್ತಿಲ್ಲ’ ಎಂದು ಎಚ್ಚರಿಸಿದರು.