ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರ ಕರ್ನಾಟಕದಿಂದ ಕುಮಾರಸ್ವಾಮಿ ಸ್ಪರ್ಧೆ ಖಚಿತ’

Last Updated 28 ಜುಲೈ 2017, 6:46 IST
ಅಕ್ಷರ ಗಾತ್ರ

ನಿಡಗುಂದಿ: ಸ್ವಾತಂತ್ರ್ಯ ಸಿಕ್ಕು 70 ವರ್ಷವಾದರೂ ಇನ್ನೂವರೆಗೂ ರಾಜ್ಯದ ಜನ ರಾಜಕೀಯ ಹಾಗೂ ಜಾತೀಯ ಸಂಕೋಲೆಗೆ ಒಳಗಾಗಿದ್ದಾರೆ. ಇದರಿಂದ ಹೊರಬಂದು ಸುಂದರ ಭಾರತ ನಿರ್ಮಾಣಕ್ಕೆ ಉತ್ತಮ ವ್ಯಕ್ತಿಯನ್ನು ಚುನಾ ವಣೆಯಲ್ಲಿ ಗೆಲ್ಲಿಸಬೇಕು ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಸುಕ್ಷೇತ್ರ ಯಲಗೂರದ ಸಮುದಾಯ ಭವನದಲ್ಲಿ ಮಂಗಳವಾರ ಎ.ಎಸ್. ಪಾಟೀಲ ಅಭಿಮಾನಿ ಬಳಗ ಏರ್ಪಡಿ ಸಿದ್ದ ಶಾಸಕರ 48ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸು ವುದು ಖಚಿತ.

ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧರಿಸಲಾಗುತ್ತದೆ. ಉತ್ತರ ಕರ್ನಾಟಕ ಭಾಗವು ಸಂಪೂರ್ಣವಾಗಿ ಅಭಿವೃದ್ಧಿಯಾಗ ಬೇಕಾದರೆ ಈ ಭಾಗವು ಸಂಪೂರ್ಣವಾಗಿ ನೀರಾವರಿಯಾಗಬೇಕು. ಪರಿಸರಕ್ಕೆ ಪೂರಕವಾದ ಕಾರ್ಖಾನೆ ಈ ಭಾಗದಲ್ಲಿ ಆರಂಭವಾಗುವುದರಿಂದ ಯುವ ಜನಾಂಗಕ್ಕೆ ಉದ್ಯೋಗ ದೊರಕುತ್ತದೆ ಎಂದು ಹೇಳಿದರು.

ಮುದ್ದೇಬಿಹಾಳ ಕ್ಷೇತ್ರ ಸಂಪೂರ್ಣವಾಗಿ ಅಭಿವೃದ್ಧಿಯಾಗಲು ಜನರು ಈ ಭಾಗದಿಂದ ಸ್ಪರ್ಧಿಸಬೇಕು ಎನ್ನುತ್ತಿರುವುದರಿಂದ 2018ರ ಚುನಾವಣೆಯಲ್ಲಿ ಇದೇ ಭಾಗದಿಂದ ಸ್ಪರ್ಧಿಸುತ್ತೇನೆ ಎಂದರು. ಯುವ ಮುಖಂಡ ಶಾಂತ ಗೌಡ ಪಾಟೀಲ ಮಾತನಾಡಿದರು. ಇದಕ್ಕೂ ಮೊದಲು ಅಂಗವಿಕಲರು ಹಾಗೂ ಮಕ್ಕಳಿಂದ ಕೇಕ್ ಕತ್ತರಿಸಿ ಅವ ರಿಗೆ ಸಿಹಿ ಹಾಗೂ ಬಟ್ಟೆ ವಿತರಿಸಿದರು.

ಸಿ.ಬಿ.ಚನ್ನಿಗಾವಿ, ಶಾಂತಗೌಡ ಮಂಗ್ಯಾಳ, ಶರಣು ಬೂದಿಹಾಳಮಠ, ಅಲ್ಲಾಭಕ್ಷ ಚಪ್ಪರಬಂದ, ಎ.ಎಸ್.ಡೆಂಗಿ, ಎನ್.ಜಿ.ಚನ್ನಿಗಾವಿ, ಹನಮಂತಗೌಡ ಬಿರಾದಾರ, ಪಾಂಡಪ್ಪ ಹಿರೇಮನಿ, ಚಿದಾನಂದ ಶಿರೂರ ಇದ್ದರು. ಯಲಗೂರೇಶ ಪಾತರದ ಸ್ವಾಗತಿಸಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT