ಖೇಹರ್ ಅವರು ಆಗಸ್ಟ್ 27ರಂದು ನಿವೃತ್ತರಾಗುವುದರಿಂದ, ಅಂದು ಅಥವಾ ಅದಕ್ಕಿಂತ ಮೊದಲೇ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.
ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಅರವಿಂದ ದಾತಾರ್, ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣಿಯನ್, ಶ್ಯಾಮ್ ದಿವಾನ್, ಆನಂದ್ ಗ್ರೋವರ್, ಸಿ.ಎಂ. ಸುಂದರಂ ಮತ್ತು ರಾಕೇಶ್ ದ್ವಿವೇದಿ ಅವರು ಪರ– ವಿರೋಧವಾಗಿ ವಾದ ಮಂಡಿಸಿದ್ದಾರೆ.