ಮೂಡುಬಿದಿರೆ: ಇಲ್ಲಿಯ ವರ್ಧಮಾನ ಪ್ರಶಸ್ತಿ ಪೀಠವು 2016ರ ಸಾಲಿನಲ್ಲಿ ವರ್ಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೊ. ಕೆ.ಇ.ರಾಧಾಕೃಷ್ಣ ಅವರ ‘ಕಣ್ಣಕಾಡು’ ಎನ್ನುವ ಮಹಾಕಾವ್ಯಕ್ಕೆ ಮತ್ತು ವರ್ಷದ ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯನ್ನು ಬೆಂಗಳೂರಿನ ಸತ್ಯಮಂಗಲ ಆರ್. ಮಹಾದೇವ ಅವರ ‘ಹೆಜ್ಜೆ ಮೂಡಿದ ಮೇಲೆ’ ಎನ್ನುವ ಕಾವ್ಯ ಕೃತಿಗೆ ನೀಡಲು ನಿರ್ಧರಿಸಿದೆ.