ಕವಿ ಸಿದ್ದಲಿಂಗಯ್ಯ ಮಾತನಾಡಿ, ‘ನಾವು ಭಾರತೀಯ ಸಾಹಿತ್ಯಕ್ಕಿಂತ ಯುರೋಪಿನ ಸಾಹಿತ್ಯವನ್ನು ಹೆಚ್ಚು ತಿಳಿಯುತ್ತಿದ್ದೇವೆ. ದೇಶದ ಅನೇಕ ಭಾಷೆಗಳ ಸಾಹಿತ್ಯ ಕನ್ನಡಕ್ಕೆ ಅನುವಾದಗೊಂಡಿದೆ. ನಾವು ವರ್ಡ್ಸ್ವರ್ತ್, ಎಲಿಯಟ್ ಕವಿಗಳನ್ನು ಓದಿದ್ದಂತೆ, ತಮಿಳಿನ ಕವಿತೆ, ತೆಲುಗಿನ ಕಥೆ, ಮಲಯಾಳಂನ ಕಾದಂಬರಿಗಳನ್ನೂ ಓದಬೇಕು’ ಎಂದು ತಿಳಿಸಿದರು.