ಪ್ರಾದೇಶಿಕ ಭಾಷೆ ಶಿಕ್ಷಣ ಮಾಧ್ಯಮವಾದರೆ ರಾಷ್ಟ್ರದ ಏಕತೆಗೆ ಹಾನಿ
ನವದೆಹಲಿ, ಆ. 18– ಪ್ರಾದೇಶಿಕ ಭಾಷೆಯನ್ನು ಬೋಧನ ಮಾಧ್ಯಮವಾಗಿ ಮಾಡುವ ಹೊಸ ಶಿಕ್ಷಣ ನೀತಿಯು ರಾಷ್ಟ್ರದ ಐಕಮತ್ಯಕ್ಕೆ ಭಂಗ ತರುವುದೆಂದೂ, ಅಲ್ಲದೆ ದೇಶ ಛಿದ್ರವಾಗುವುದಕ್ಕೆ ಎಡೆಮಾಡಿಕೊಡುತ್ತದೆಂದೂ ಇಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಸಭೆಯಲ್ಲಿ ಕೆಲವು ಮಂದಿ ಸದಸ್ಯರು ಅಭಿಪ್ರಾಯಪಟ್ಟರು.