ಕೇಂದ್ರದ ವಿದ್ಯಾರ್ಥಿಗಳಾದ ಯಶ್ಮಿತಾ ಮತ್ತು ಬಳಗದವರಿಂದ ತುಳುವಿನ ಪ್ರಸಿದ್ಧ ಹಾಡುಗಳ ಗಾಯನ ಕಾರ್ಯಕ್ರಮ ನಡೆಯಿತು. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ‘ಭೂಮಿಗ್ ಪೊಸ ವರ್ಷ ಬಯ್ದ್ಂಡ್’ ಎಂಬ ಹಾಡು ಸಭೆಯನ್ನು ಮಂತ್ರ ಮುಗ್ಧಗೊಳಿಸಿತು. ಕೇಂದ್ರದ ಸಂಯೋಜಕ ಡಾ. ಯೋಗೀಶ ಕೈರೋಡಿ ಸ್ವಾಗತಿಸಿದರು. ಶ್ರದ್ಧಾ ನಿರೂಪಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಪ್ರತೀಕ್ಷಾ ವಂದಿಸಿದರು.