ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಬೃಹತ್ ಸಂಖ್ಯೆಯಲ್ಲಿ ಬಂದಿದ್ದ ಲಿಂಗಾಯತರು, ‘ಸ್ವತಂತ್ರ ಧರ್ಮ ನಮ್ಮೆಲ್ಲರ ಆದ್ಯತೆ’, ‘ಲಿಂಗಾಯತ ವ್ಯಕ್ತಿ ದೇಶಕ್ಕೊಂದು ಶಕ್ತಿ’, ‘ಭಾರತ ದೇಶ ಜೈ ಬಸವೇಶ’ ಎನ್ನುವ ಘೋಷಣೆಗಳನ್ನು ಮೊಳಗಿಸಿ, ಶಕ್ತಿ ಪ್ರದರ್ಶಿಸಿದರು.